ಶ್ರೀ ಕೂ ಮಂ ಭಟ್ಟರ ಕಾವ್ಯವಿಳಾಸ

ವ್ಯಾಕರಣ ಶಿರೋಮಣಿ ರಣಾರಣ ಶ್ರೀ
ಕೂ ಮಂ ಭಟ್ಟರು ರಚಿಸಿದರು ಒಂದು ಕಾವ್ಯ
ಜನಿವಾರದಿಂದ ವೃತ್ತಗಳ ಹಾಕಿ
ಶಿವಲಿಂಗದಿಂದ ಮಾತ್ರೆಗಳ ತೂಗಿ
ಕರ್ಮರ ಬ್ರಾಹ್ಮಣನ ಮಮ್ಮಟ ಕಾವ್ಯ
ದಿವಿನಾಗಿ ಬಂತು
ಪರಂಪರೆಯ ಹವ್ಯ ಕವ್ಯ
ಮಟಮಟ ಮಧ್ಯಾಹ್ನ ಮೂಗು ತುದಿಯಿಂದ
ಬೆವರು ಬರುವಂತೆ
ಬೆವರು ಬರುವಂತಲ್ಲ ಸರಸ್ವತಿಯ
ಮೊಲೆ ಹಾಲಿನಂತೆ
ಹಾಲಿನಂತಲ್ಲ ಹುಚ್ಚು ಹೊಳೆಯಂತೆ

ಏನಾದರೇನಂತೆ ಅಚ್ಚಾಗಿ ಬಂತು
ಕುಪ್ಪಳಿಸಿ ಕುಪ್ಪಳಿಸಿ ಬಳಗಭಟ್ಟಾರಕರಿಂದ
ಜುಟ್ಟು ಹಿಡಿದೆತ್ತಿಸಿಕೊಂಡು
ದಕ್ಕಿಸಿಕೊಂಡರು ಪಾರಿತೋಷಕ ಒಂದಲ್ಲ ಎರಡಲ್ಲ

ಹೀಗೆ
ಕಾವ್ಯ ಪಾರಿತೋಷಕವಾಗಿ
ಪಾರಿತೋಷಕ ಭಟ್ಟರೇ ಆಗಿ
ಎರಡೂ ಸತ್ತವು ಒಂದು ಚಳಿಮಳೆಗಾಳಿಯ ದಿನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಟಕಕ್ಕಾಗಿ ನಾಲ್ಕು ಎಕರೆ ಜಮೀನು ಮಾರಿದೆ
Next post ನುತಿಸುವೆನು ಬಸವ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys